ಕರಾವಳಿ ವಾಯ್ಸ್ ನ್ಯೂಸ್ 

ನವದೆಹಲಿ: ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಸೆಪ್ಟೆಂಬರ್ 28ರಿಂದ 30ರವರೆಗೆ ಮೂರು ದಿನಗಳ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ, ಗ್ರಾಹಕರು ಅಗತ್ಯ ಬ್ಯಾಂಕಿಂಗ್ ವ್ಯವಹಾರಗಳನ್ನು ಮುಂಚಿತವಾಗಿಯೇ ಪೂರ್ಣಗೊಳಿಸುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸಲಹೆ ನೀಡಿದೆ.

Banner Ad

ಮುಷ್ಕರದ ಅವಧಿಯಲ್ಲಿ ಅಗತ್ಯ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಎಸ್‌ಬಿಐ ತಿಳಿಸಿದೆ. ಗ್ರಾಹಕರು ಮುಷ್ಕರದ ದಿನಗಳಿಗೂ ಮುನ್ನವೇ ಪ್ರಮುಖ ಬ್ಯಾಂಕಿಂಗ್ ವ್ಯವಹಾರಗಳನ್ನು ಪೂರ್ಣಗೊಳಿಸಿಕೊಳ್ಳುವಂತೆ ಸೂಚಿಸಲಾಗಿದೆ.

ನಗದು ಅಗತ್ಯವಿರುವವರು ಎಟಿಎಂ ಹಾಗೂ ಎಡಿಡಬ್ಲ್ಯುಎಂಗಳನ್ನು ಬಳಸಬಹುದಾಗಿದೆ. ಕಸ್ಟಮರ್ ಸರ್ವಿಸ್ ಪಾಯಿಂಟ್‌ಗಳ (CSP) ಸೇವೆಯನ್ನೂ ಪಡೆಯಬಹುದು. ಇಂಟರ್‌ನೆಟ್ ಬ್ಯಾಂಕಿಂಗ್, YONO SBI, ಮೊಬೈಲ್ ಬ್ಯಾಂಕಿಂಗ್, UPI ಸೇರಿದಂತೆ ಲಭ್ಯವಿರುವ ಡಿಜಿಟಲ್ ಸೇವೆಗಳನ್ನು ಬಳಸುವಂತೆ ಬ್ಯಾಂಕ್ ಮನವಿ ಮಾಡಿದೆ.

ಮುಷ್ಕರದ ಅವಧಿಯಲ್ಲಿ ಉಂಟಾಗಬಹುದಾದ ಅನಾನುಕೂಲತೆಗೆ ಎಸ್‌ಬಿಐ ವಿಷಾದ ವ್ಯಕ್ತಪಡಿಸಿದ್ದು, ಗ್ರಾಹಕರ ಸಹಕಾರಕ್ಕೆ ಧನ್ಯವಾದ ತಿಳಿಸಿದೆ.

 

Please Share: