ಕರಾವಳಿ ವಾಯ್ಸ್ ನ್ಯೂಸ್ 

ಭಟ್ಕಳ: ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿ ಭಟ್ಕಳದ ನೂರ ಮಸೀದಿ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ಪತ್ತೆಹಚ್ಚಲ್ಪಟ್ಟಿದ್ದು, ಸ್ಥಳದಲ್ಲಿ ಚಾಲಕ ಬಂಧನವಾಗಿದ್ದಾರೆ. ಘಟನೆ ಸಾಕಷ್ಟು ಕುತೂಹಲ ಸೃಷ್ಟಿಸಿದೆ.

ಆಹಾರ ನಿರೀಕ್ಷಕ ಉದಯ ದ್ಯಾಮಪ್ಪ ತಳವಾರ ಮತ್ತು ಡಿವೈಎಸ್ಪಿ ಮಹೇಶ್ ಕೆ.ಎಂ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ, ಸುಮಾರು 9,500 ಕೆ.ಜಿ. ಅಕ್ಕಿ (ಅಂದಾಜು ಮೌಲ್ಯ ರೂ. 3.23 ಲಕ್ಷ) ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ಕಂಟೇನರ್ (KA–52 B–4877) ಮೂಲಕ ಸಾಗಿಸಲಾಗುತ್ತಿತ್ತು.

ಪೊಲೀಸರು ಈ ಅಕ್ರಮ ಸಾಗಾಟದ ಪ್ರಮುಖ ಶಂಕಿತ ಮೋಹಮ್ಮದ್ ಸಮೀರ್ ಭಟ್ಕಳ ಎಂದು ಗುರುತಿಸಿದ್ದಾರೆ. ಸ್ಥಳದಲ್ಲಿ ವಾಹನದ ಚಾಲಕ ಪ್ರವೀಣ್ ಎನ್.ಆರ್. (28, ನರಸಿನಕುಪ್ಪೆ–ಹಾಸನ) ಬಂಧನಗೊಂಡಿದ್ದಾರೆ.

ಈ ಪ್ರಕರಣ ಸಂಬಂಧ ಆಹಾರ ನಿರೀಕ್ಷಕ ತಳವಾರ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪಿಎಸೈ ನವೀನ್ ನಾಯ್ಕ ಪ್ರಕರಣ ದಾಖಲಿಸಿಕೊಂಡು, ಕಂಟೇನರ್ ಮತ್ತು ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ. ತನಿಖೆ ಮುಂದುವರಿಯುತ್ತಿದ್ದು, ಪ್ರಮುಖ ಆರೋಪಿ ಮತ್ತು ಇತರರ ಪತ್ತೆಗೆ ಅಧಿಕಾರಿಗಳು ತೊಡಗಿದ್ದಾರೆ.

 

Please Share: