ಕರಾವಳಿ ವಾಯ್ಸ್ ನ್ಯೂಸ್

ಶಿರಸಿ: ತಾಲೂಕಿನ ಚಿಪಗಿ ಸಾಮಿಲ್‌ ಬಳಿ ನಿಲ್ಲಿಸಿಟ್ಟಿದ್ದ ಸರಕು ಸಾಗಾಣಿಕೆ ವಾಹನವನ್ನು ಅಪರಿಚಿತ ಕಳ್ಳರು ಕದ್ದೊಯ್ದಿರುವ ಘಟನೆ ಶಿರಸಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.

ಮನೆಯ ಎದುರಿನ ಶಿರಸಿ–ಹುಬ್ಬಳ್ಳಿ ರಸ್ತೆ ಅಂಚಿನಲ್ಲಿ ನಿಲ್ಲಿಸಿಟ್ಟಿದ್ದ ಅಶೋಕ ಲೈಲ್ಯಾಂಡ್ “ದೋಸ್ತ್” ಮಾದರಿಯ ಸರಕು ವಾಹನವನ್ನು ಕಳ್ಳರು ರಾತ್ರಿ ವೇಳೆ ಎಗರಿಸಿದ್ದು, ಸುಮಾರು ₹4.5 ಲಕ್ಷ ಮೌಲ್ಯದ ವಾಹನ ನಾಪತ್ತೆಯಾಗಿದೆ.

ಕುತೂಹಲಕರ ವಿಷಯವೆಂದರೆ — ಕಳ್ಳರು ತಮ್ಮ ಕೃತ್ಯಕ್ಕೆ ಉಪಯೋಗಿಸಿದ ನೋಂದಣಿ ಫಲಕವಿಲ್ಲದ ಸ್ಕೂಟಿಯನ್ನು ಸ್ಥಳದಲ್ಲೇ ಬಿಟ್ಟು ಹೋಗಿದ್ದಾರೆ!

ವಾಹನ ಮಾಲೀಕ ಕಾರ್ತಿಕ ಕುಮಾರ ಹುಡೇದ ಈ ಕುರಿತು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪಿ.ಎಸ್.ಐ ಅಶೋಕ ರಾಠೋಡ ಕಳ್ಳತನದ ತನಿಖೆ ಆರಂಭಿಸಿದ್ದು, ಸ್ಕೂಟಿಯ ಸುಳಿವು ಆಧರಿಸಿ ಕಳ್ಳರ ಹಾದಿ ಪತ್ತೆಗೆ ಚಟುವಟಿಕೆ ನಡೆಸುತ್ತಿದ್ದಾರೆ.

ಕಳ್ಳರ ಪತ್ತೆಗಾಗಿ ಪೊಲೀಸರು ಹಗರಣದ ಸುತ್ತಮುತ್ತ ಸಿಸಿಟಿವಿ ದೃಶ್ಯಾವಳಿಗಳ ವಿಶ್ಲೇಷಣೆಯಲ್ಲಿದ್ದಾರೆ.

 

 

Please Share: